ಬೆಳಕು-ಬಳ್ಳಿ

ತೊಳಲಾಟ…..

Share Button

ನಡೆದಿದೆ ಹೋರಾಟ ಎನ್ನೊಳಗೆ
ಅನುದಿನ ಅನುಕ್ಷಣ ಬಿಡದೆ ಕಾಡಿದೆ

ನೆಲೆಯು ಕುಸಿದು ಭರವಸಯೇ ಬತ್ತುತ್ತಿದೆ
ಹಲವರು ಹಚ್ಚಿಕೊಂಡ ಬಣ್ಣ ಬಯಲಾಗುತ್ತಿದೆ

ನನ್ನದೆನ್ನುವ ಭಾವ ದೂರವಾಗಿ ಬರೀ ಶೂನ್ಯ ತುಂಬುತ್ತಿದೆ
ನಮ್ಮದೆನ್ನುವ ನೋವು ಹಿಂಡಿ ಹಿಪ್ಪೆಯಾಗಿಸುತ್ತಿದೆ

ಗೌರವ ಮನ್ನಣೆಗಳು ಕಡಿಮೆಯಾಗುವ ಮುನ್ನವೇ
ನಿರೀಕ್ಷೆಗಳು ಹುಸಿಯಾಗಿ ಸೋಲು ಆವರಿಸುವ ಕ್ಷಣವೇ

ಮರೆಯಾಗಿ ಹೋಗಿಬಿಡು ಹೆಸರ ಮರೆತು
ತೊರೆಯಾಗಿ ಹರಿದು ಬಿಡು ಹೊಸ ದಾರಿ ಹಿಡಿದು

ಯಾರಿಗೂ ಯಾರು ಅನಿವಾರ್ಯವಲ್ಲ
ಪರಿಸ್ಥಿತಿಯ ಕೈಗೊಂಬೆಗಳೇ ನಾವೆಲ್ಲಾ

ಆಸರೆ ನೀಡಿ ಸಲುಹಿದ ತಾಣ ತಣ್ಣಗಿರಲಿ
ನಂಬಿರುವ ಜನರು ಇದಕೆ ಕೈ ಕೊಡದಿರಲಿ

ದೈವ ನಿರ್ಣಯದ ಮುಂದೆ ನಮ್ಮದೇನು
ಏನಾಗಬೇಕು ಅದನ್ನು ತಡೆಯಲು ನಾವೇನು

ಬರುವ ತಿರುವುಗಳಲಿ ಎದೆ ಗಟ್ಟಿ ಮಾಡಿಕೊಂಡು ಸಾಗಬೇಕು
ಜಯಾಪಜಯ ಮಾನಾಪಮಾನವನ್ನು ಆ ಭಗವಂತನಿಗೆ ಬಿಡಬೇಕು…..ಬಿಡಬೇಕು…..

– ಕೆ.ಎಂ ಶರಣಬಸವೇಶ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *