ಕವಿತೆ….ಕಲ್ಪನೆ

Share Button

Ku.Sa Madhusudan Nair

ಕು.ಸ.ಮಧುಸೂದನ್

ಕಲ್ಪನೆ

ಕಲ್ಪನೆ ಅನ್ನೋದು
ಹಕ್ಕಿಯ ಹಾಗೆ
ಒಂದೇ ಕಡೆ ನಿಲ್ಲಲ್ಲ
ಬೆಳಿಗ್ಗೆ ಹಸಿರು ಕಾಡ ನೆತ್ತಿಯ ಮೇಲೆ ಹಾರಿ
ಮದ್ಯಾಹ್ನ ಮರುಭೂಮಿಯಗಲಕ್ಕೆ ರೆಕ್ಕೆ ಬೀಸಿ
ಸಂಜೆ ಸಾಗರ ದಾಟಿ
ಮರಳುವುದು ಮನೆಗೆ
ತನ್ನ ಗೂಡಿಗೆ

ಎಷ್ಟೇ ಹಾರಿದರೂ ಆಕಾಶದಲ್ಲಿ
ಮರಳಲೇ ಬೇಕು ಮಣ್ಣಿಗೆ
ಅರಿವುಂಟು ಹಾರುವ ಹಕ್ಕಿಗೆ
ಪಾಠವುಂಟು
ಅಹಮ್ಮಿನಲಿ ಮೆರೆವ ಮನುಷ್ಯನಿಗೆ!

Imagination

ಕವಿತೆ

ಕವಿತೆ ಅಂದರೆ
ಬರೀ ಶಬ್ದಗಳಲ್ಲ
ಅವುಗಳ ಅಂದವಾಗಿ ಜೋಡಿಸಿದ
ಕವಿಯ ಚಮತ್ಕಾರವೂ ಅಲ್ಲ
ಒಳಗಣ್ಣಿಗೆ ಕಾಣುವುದು
ಕಾಣದ್ದೆಲ್ಲ
ಒಳಗಿವಿಗೆ ಕೇಳುವುದು
ಕೇಳದ್ದೆಲ್ಲ

ಬರೆಯದೇ ಉಳಿದದ್ದು ಬರೆದಂತೆ
ಬರೆದದ್ದು
ಬರೆಯದೆ ಬಿಟ್ಟಂತೆ
ಅರ್ಥವಾಗದು ಅರ್ಥವಾದರು
ಒಮ್ಮೊಮ್ಮೆ
ಅನರ್ಥವಾಗುವುದು!

– ಕು.ಸ.ಮಧುಸೂದನ್

2 Responses

  1. ಬಸವಾರಾಜ.ಜೋ.ಜಗತಾಪ says:

    ಸರ್ ಇದನ್ನಾ ನಾನ ಎರಡ ಸಾರಿ ನಮ್ಮ ಮಾಜಿ ಪ್ರಧಾನಿ ಶ್ರೀ ದೇವೆಗೌಡರ ಮಾತಾಡೊ ಶೈಲಿಲಿ ಓದಿದೆ ಬಾಳ ಸೊಗಸೆನಿಸಿತು……

  2. Sneha Prasanna says:

    supper sir …

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: