ಪ್ರವಹಿಸು ಭಾವನದಿ

Share Button

 

ನನ್ನೊಳಗೆ ಸೆರೆಯಾಗಿ ಅವಿತಿರುವೆ ಏಕೆ
ಹೊರಬಂದು ವಿಹರಿಸು ಸ್ವಚ್ಛಂದವಾಗಿ
ಸ್ವತಂತ್ರನಲ್ಲವೆಂಬ ಭಯವೇಕೆ
ಓ ಭಾವವೇ ಹರಿದುಹೋಗೊಮ್ಮೆ ನದಿಯಾಗಿ

ನನ್ನ ನಿನ್ನ ನಡುವೆ ಭೇದವೆನೆಣಿಸದಿರು
ಕಡಿದು ಹೋದೀತು ಸ್ನೇಹದ ಕೊಂಡಿ
ವಿಧಿವಿಲಾಸಕೆ ಸುಮ್ಮನೆ ಬಲಿಯಾಗದಿರು
ತೋಡದಿರು ಕಂದಾಚಾರದ ಗುಂಡಿ

ಲೋಕಮಾನ್ಯವಾಗುವ ಆಸೆಯಿಲ್ಲವೆ ನಿನಗೆ
ಈಜಿ ದಡಸೇರು ಕೈ ಸೋಲುವ ಮುನ್ನ
ನೀನಿಲ್ಲದ ಜಗವ ಊಹಿಸಲಾಗದೆನಗೆ
ಹಗಲಿರುಳು ಧೀ ಶಕ್ತಿಯಿಂದ ಮುನ್ನಡೆಸೆನ್ನ

ಯಾರ ಹಂಗಿಲ್ಲದೆ ಬದುಕುವ ನಾವು
ಭಾವನೆಯೇ ಇನ್ನಾದರೂ ಜಾಗೃತವಾಗು
ಬರದಿರಲಿ ನಿನಗೆ ಎಂದಿಗೂ ಸಾವು
ಭಾವನಾ ಲೋಕದಿ ನೀ ಅಜರಾಮರನಾಗು
.

– ಲಕ್ಷ್ಮೀಶ ಜೆ.ಹೆಗಡೆ

1 Response

  1. Sneha Prasanna says:

    ಓ ಭಾವವೇ ಹರಿದುಹೋಗೊಮ್ಮೆ ನದಿಯಾಗಿ…ವಾವ್…!ಗುಡ್. ಒಳ್ಳೆಯ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: