ಬೆಳಕು-ಬಳ್ಳಿ

ನೆಲದ ಕವಿತೆ……

Share Button

ಕರಗದ ಬಾನು
ಕದಲದ ಕಡಲು
ಮೋಹದ ಛಾಯೆ
ಮನಸಿನ ಮಾಯೆ
ಎಲ್ಲವೂ ಪದದ
ಸುತ್ತ ಸುತ್ತಿ
ದೂರ ನಿಲ್ಲುತ್ತದೆ
ಗಾಳಿ ಚದುರಬೇಕು
ಗಂಧ ಹರಡಬೇಕು
ಗೂಡು ತೂಗಬೇಕು
ಗಿರಿ ಗಹ್ವರಗಳು
ನಿಶ್ಚಲವಾಗಬೇಕು
ಅಂತಃಕರಣ ಶಕ್ತಿ
ದೀಪದ ಸಾಲಿನ ನಡುವೆ
ನಿಂತು ಬೆಳಗಬೇಕು
ಸಂಜೆಗೆ ಒಂದು ಹಣತೆಯ
ಬೆಳಕು ಪುಟಿದೇಳಬೇಕು
ನೆಲದ ಕವಿತೆಯೊಳಗೆ
ತಾನೇ ತಾನಾಗಿ
ಝರಿಯೊಂದು ‌ಹರಿಯಬೇಕು
ತಾಳ ಲಯ ಸಂಗೀತದಾಚೆ
ಪುಟ್ಟ ದೋಣಿಯ ಪಯಣ
ಸಾಗಬೇಕು ಅನುದಿನ
ಹಸಿವೆಯ ಹರಿವು
ಸುಳಿಯಾಗಬೇಕು
ಪಟಪಟನೆ ಉರಿವ
ಕೆಂಡದಂಗಳದಿ
ಕಂಗಳ ಸುಳಿಮಿಂಚು
ಸಂಚು ರೂಪಿಸಿ
ಒಳಿತಿನ ಒಳನೋಟವ
ನುಡಿಸಿ ಕೈ ಹಿಡಿದು
ಅನುಸರಿಸಬೇಕು……

-ನಾಗರಾಜ ಬಿ ನಾಯ್ಕ. ಹುಬ್ಬಣಗೇರಿ.

8 Comments on “ನೆಲದ ಕವಿತೆ……

  1. ಮುಂಗಾರು ಮಳೆ ಕೈ ಕೊಟ್ಟ ಈ ದಿನಮಾನದಲ್ಲಿ ಈ ಕವಿತೆಯು ಅತ್ಯಂತ ಸಮಯೋಚಿತ ಮತ್ತು ಸಮಕಾಲೀನ.

    ಪುಟ್ಪುಟ್ಟ ಪದಗಳಲ್ಲೇ ವಾಕ್ಯವಾದ
    ಇದು ಲಯಬದ್ಧ ಮತ್ತು ಅರ್ಥಪೂರ್ಣ.

    ಭುವಿಯ ಬೇಗೆಯೇ ಹೀಗೆ ಅಭಿವ್ಯಕ್ತವಾಗುವಾಗ
    ಅದರ ಒಂದಂಗವಾದ ನಮ್ಮ ಹತಾಶೆಯೂ ಅದರೊಳಡಗಿದೆ
    ಎಂಬುದನು ಧ್ವನಿಪೂರ್ಣವಾಗಿ ಕಟ್ಟಿ ಕೊಟ್ಟಿದೆ.

    ಧನ್ಯವಾದಗಳು ಸರ್…..

    1. ಸರ್ ತಮ್ಮ ಅಭಿಮಾನದ ಓದಿಗೆ ತುಂಬಾ ತುಂಬಾ ಧನ್ಯವಾದಗಳು. ಅರ್ಥಪೂರ್ಣ ಗ್ರಹಿಕೆ ಜೊತೆಗೆ ಓದಿನ ವಿಸ್ತಾರ ನೋಟ ತಮ್ಮ ಸಂದೇಶದಲ್ಲಿದೆ ಸರ್……….

  2. ಮಳೆರಾಯನ ಅನುಪಸ್ಥಿತಿಯ ಇಂದಿನ ನಿರಾಶಾದಾಯಕ ಸನ್ನಿವೇಶದಲ್ಲಿ, ಆಶಾಭಾವವನ್ನು ಹೊತ್ತ ಸುಂದರ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *