ಅಮರ ಯೋಧನ ಅಮ್ಮನ ಅಳಲು..

Share Button

 

ಓ…ನನ್ನ ಚಿಗುರಳಿದ ಚೇತನ
ಬೇಡವೆಂದರೂ ಮರೆಯುವುದಿಲ್ಲ ,ನಿನ್ನ
ಅಮರವೀರ ಕಥನ|

ಕಟುಕನ ವಾಮಮಾರ್ಗಕೆ ಬಲಿಯಾಗಿ
ತಾಯ್ನೆಲದಲ್ಲಿ ಹೊನ್ನಕ್ಷರದಿ ಬರೆಸಿ ಮರೆಯಾದ
ಯೋಧ ನೀನೇ ಧನ್ಯ|

ಕಂದಾ ಭೂದೇವಿಮಡಿಲಲ್ಲಿ ಮಲಗಿದಾಗ
ದಣಿವರಿದ ನಿನ್ನ ದುಡಿಮೆಗೆ ತಾಯಾಗಿ
ಹಾಡಿದಳಲ್ಲ ಚಿರನಿದ್ರೆಗೆ ರಾಗ|

ನನ್ನಲ್ಲಿ ಪಿಸುಗುಟ್ಟುತ್ತಿದೆ ನಿನ್ನ
ಬಿಸಿಯುಸಿರು ಕಲುಕುತ್ತಿದೆ ಗರ್ಭಾಶಯವ
ಮುಲುಕುತ್ತಿದೆ ನರನಾಡಿ ಬಿಗಿತ|

ಆ ಕಟುಕನ ಮೋಸವಂಚನೆ ಬೆನ್ನಟ್ಟದೆ
ಬಿಡಲಾರದು ಆತನ ವಂಶ ಸುಟ್ಟು
ಬಿಡುವುದದು ಹೆಡತಲೆಯ ಮೃತ್ಯು ಬೇಗ||

-ವಿಜಯಾಸುಬ್ರಹ್ಮಣ್ಯ,ಕುಂಬಳೆ

2 Responses

  1. Nayana Bajakudlu says:

    ಆ ಹೆತ್ತೊಡಲ ಸಂಕಟ ಅವಳು ಬದುಕಿರುವಷ್ಟು ದಿನವೂ ಶಾಶ್ವತ

  2. Vasanth Shenoy says:

    Jai Hind

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: