ಈ ಕಥೆ ನಿಮಗೆ ಗೊತ್ತಾ?

Share Button

Manushree Jois

ಸಾಗರದಾಚೆಯಲೊಂದು ಸುಭಿಕ್ಷ ನಾಡು
ಪರಮ ಶಿವಭಕ್ತ ರಾಜ ಕಾಯುವ ಬೀಡು
ದೊರೆಗೊಬ್ಬಳು ಮುದ್ದಿನ ತಂಗಿ ಜೊತೆಗೆ
ವಿಧವೆ ಅವಳ ಬಾಳೇ ಬೇಸರ ಅವಗೆ

ತವರಲ್ಲೇ ಇದ್ದವಳು ಹೊರಟಳು ಹೊರಗೆ
ಸುಮ್ಮನೆ ವಾಯುವಿಹಾರ ಕಾಲಹರಣಕೆಂದೆ
ಸಂಜೆಯ ತಂಗಾಳಿಗೆ ಎದೆಯ ಆಸೆಯುಕ್ಕಿ
ವಿರಹದ ಬೇಗೆಯು ಕಾಯಿಸಿತು ಬಡದೇಹವ

ಕಂಡಳಾಗ ನೀಳ ಸುಂದರ ಪುರುಷನೊಬ್ಬನ
ಮಾಡಿಕೊಂಡಳು ತಾನೇ ಪ್ರೇಮ ನಿವೇದನೆ
ಆದರೇನು? ಅವ ವಿವಾಹಿತನೆಂದ ನಸು ನಕ್ಕು
ಅವನೇ ತೋರಿದ ಜೊತೆಯಲ್ಲಿದ್ದ ಇನ್ನೋರ್ವನ

ಮನದ ಕಾವನಿಳಿಸಿ ನಾಚುತ್ತಾ ಕೇಳಿದಳು
ಅನುರಾಗದ ಅರ್ಪಣೆ ಕೇಳದೆ ಕುಪಿತಗೊಂಡ
ಮಾತಿಗೆ ಮಾತು ಬೆಳೆದು ಗಾಯವಾಯಿತು
ಅಳುತ್ತಾ ಹಿಂದಿರುಗಿದಳು ಪರಿತ್ಯಕ್ತ ನಾರಿ

setubandahnaವಿಷಯ ಮುಟ್ಟಿತು ಕೊನೆಗೆ ರಾಜನಿಗೆ
ಮಮತೆ ಹರಿದು ಕೋಪದಲ್ಲಿ ಉರಿದುರಿದು
ಅಬ್ಬರಿಸಿ ಬಂಧಿಸಿ ಹಾರಿಸಿಕೊಂಡು ಬಂದ
ಸೋಗಿನಲಿ ವಿವಾಹಿತನ ಪ್ರೀತಿಯ ವನಿತೆಯನು

ಪತಿವ್ರತೆಯ ಬಂಧನವ ಬಿಡಿಸಲು ಆಯಿತು
ಮಹಾಯುದ್ಧ ಸಾಗರಕೆ ಸೇತುವೆ ಕಟ್ಟಿ
ಮುತ್ತಿದರು ರಾಜ್ಯವ ವಧಿಸಿದರು ಅಣ್ಣನ
ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆ ಎಂಬ ಸುಖಾಂತದಲ್ಲಿ

 

– ಮನುಶ್ರೀ ಜೋಯಿಸ್

9 Responses

  1. ಒಂದೇ ಹಿಡಿಯಲ್ಲಿ, ಕಟ್ಟಿಕೊಟ್ಟ ರಾಮಾಯಣ ಚೆನ್ನಾಗಿದೆ 🙂

  2. ವಿನಯ ಕುಮಾರ says:

    ಸೊಗಸಾಗಿದೆ.
    ತುಂಬಾ ಮೆಚ್ಚುಗೆಯಾಾಯಿತು. 🙂

  3. nishkalagorur says:

    ಸೂಪರ್

  4. Manushree says:

    ಧನ್ಯವಾದಗಳು 🙂

  5. Bhavani says:

    Very nice SURAGI

  6. abhishek says:

    nice

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: