ಮಳೆ ಮತ್ತು ಇಳೆಯ ಮೊಹಬ್ಬತ್ತ…

Share Button
Basavaraja  Jotiba Jagataapa

ಬಸವರಾಜ ಜೋತಿಬಾ ಜಗತಾಪ

ಮಳೆ ಮಳೆ ಮಳೆ ಮಳೆಯಂದ
ನೇಗಿಲಯೋಗಿಯ ಮನಿಯ ಮುಂದ
ಮಿಂಚುತ್ತ ಗುಡುಗುತ್ತ ಮೇಘದೊಳಗಿಂದ
ವರುಣನಾಗಿ ನೀ ಬರುವೆ ಮೇಲಿಂದ

ಹನಿಯಾಗಿ ಧರೆಗಿಳಿದು ಬರುವಾಗ
ಹೊಲದೊಳಗ ಝರಿಯಾಗಿ ಸುರುವಾಗಿ
ಸರೋವರವಾಗಿ ಹರಿಯುತ್ತ ಓಡುತ್ತ
ಬಳಕುತ್ತ ಬಾಗುತ್ತ ಒಡ್ಡುಗಳ ಹತ್ತುತ್ತ

ಅಕ್ಕ ತಂಗಿಯರನ್ನೆಲ್ಲ ಕೂಡಿಸಿಕೊಂಡ
ಒಂದಾಗಿ ಕೆರೆಯ ಕೋಡಿಯ ಒಡಕೊಂಡ
ಹಳ್ಳವಾಗಿ ಎಲ್ಲರನೂ ಒಡಗೂಡಿಸಿಕೊಂಡ
ಹರಿ ಹರಿದೂ ಹೊಳೆಯಾ ಸೇರಿಕೊಂಡ

ಅಣೆಕಟ್ಟಿನ ಕಟ್ಟೆಯೋಳಗೆ ಒಗ್ಗಟ್ಟಾಗಿ
ನಿಂತುಕೊಂಡು ನೀ ಮನುಜನಿಗೆ ಜೀವವಾಗಿ
ಕರ ಮುಗಿದು ಬೇಡಿ ನಿನ್ನ ಕರೆಯಲಾಗಿ
ಕೋಟಿ ಜನರ ಜೀವಕ್ಕೆ ಉಸಿರಾಗಿ

ಭೂಮಿತಾಯಿಯ ಮಡಿಲು ಹಸರಿಸಿ
ಅನ್ನವಾಗಿ ಜೀವರಾಶಿಗಳೆಲ್ಲವನೂ ಹರಸಿ
ಕೈಲಾಸದಿ ಗಂಗೆಯಾಗಿ ಹರನ ಜಡೆಯನ್ನರಿಸಿ
ಕುಲಕೋಟಿ ಕಾಪಾಡುವ ತಾಯೆ ನೀನಗೆ ಶರಣು ಶರಣೆಂಬೆ.

– ಗೌಡಗಟ್ಟಿ ಬಸವಣ್ಣ.

2 Responses

  1. ಬಸವರಾಜರೇ
    ನಿಮ್ಮ ಮಳೆಯ ಕವನ ತುಂಬಾ ಚೆನ್ನಾಗಿ ಬಂದಿದೆ
    ಶರಣು

  2. Sneha Prasanna says:

    ಚೆನ್ನಾಗಿದೆ..:)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: