ನಕ್ಕು ಹಗುರಾಗಬೇಕು ನಾವಿಲ್ಲಿ
ಬಿಕ್ಕಿ ಬರಿದಾಗಬೇಕು ಜಗದಲ್ಲಿ
ನಮ್ಮೊಳಗಿನ ನೋವುಗಳನ್ನೆಲ್ಲ
ಹೊರಹಾಕಿ ಹೊಸದಾಗಬೇಕಿಲ್ಲಿ
ಒಳಗೊಳಗೆ ನೋವ ಇಟ್ಟುಕೊಂಡು
ಸುಮ್ಮನೆ ನೊಂದುಕೊಳ್ಳುವುದೇಕೆ
ಎಲ್ಲವನ್ನೂ ಹೊರಗೆ ನೂಕಿಕೊಂಡು
ಖುಷಿ ಖುಷಿಯಾಗಿ ಇರಬಾರದೇಕೆ
ಅಳುತ ಕುಳಿತರೆ ಅಳಿಸುವುದು
ನಕ್ಕರೆ ನಲಿವೇ ಗೆಲುವಾಗುವುದು
ಸುತ್ತ_ಮುತ್ತಲೂ ಬದಲಾಗುವುದು
ಬದುಕು ಅರಳಿ ನಲಿವಾಗುವುದು
ಬಾಳಪುಟದಲ್ಲಿ ಬೆಳಕು ಮೂಡುವುದು
ವಿಷಾದ ಭಾವ ದೂರ ಸಾಗುವುದು
ಕನಸುಗಳು ಮನದಿ ಗರಿಗೆದರುವುದು
ಭವ್ಯತೆಯ ನೋಟ ನಮ್ಮದಾಗುವುದು
ಬದುಕಿನಲ್ಲಿ ಮೂಡಬೇಕು ಗೆಲುವಿನ ಸಾಂಗತ್ಯ
ಅರಿವ ಮೂಡಿಸುವುದು ನಮ್ಮಯ ಸಾಹಿತ್ಯ
ಹೊಂದಿಕೊಂಡು ಹೋಗುವುದು ಬದುಕಿನ ಅಗತ್ಯ
ನೋಟ ಬದಲಾದರೆ ಬದಲಾಗುವುದು ಸತ್ಯ
ನಮ್ಮಯ ಬದುಕು ಅರಳಬೇಕು ದಿನನಿತ್ಯ
–ನಾಗರಾಜ್ ಜಿ. ಎನ್. ಬಾಡ, ಕುಮಟ

ಕವಿತೆಯ ಬದುಕೂ ಅರಳಿದೆ,
ಪ್ರತಿ ಸಾಲಲೂ ಪ್ರಾಸದ ಮೂಲಕ
ನೋಟ ಬದಲಿಸಿದಾಗ ಅನಿಸು
ವುದು ಸತ್ಯ, ನಾವು ಬದಲಾಗಬೇಕ !
ಅಭಿನಂದನೆ ಕವಿಗಳಿಗೆ.
ಧನ್ಯವಾದಗಳು ಸರ್
ಅರ್ಥಪೂರ್ಣ ಕವನ..ಸಾರ್
ಧನ್ಯವಾದಗಳು ಮೇಡಂ
Beautiful. ಬದುಕು ನಿಂತ ನೀರಲ್ಲ, ನಿರಂತರ ಹರಿವಿದೆ ಇಲ್ಲಿ.
ಧನ್ಯವಾದಗಳು ಮೇಡಂ
❤
ಚಂದದ ಕವನವಿದಾಗಿದೆ.
ಧನ್ಯವಾದಗಳು ಮೇಡಂ
ಕವಿತೆ ನಿತ್ಯ ಸತ್ಯ ದರ್ಶನವನ್ನು ಸೊಗಸಾಗಿ ಮಾಡಿಸುವಲ್ಲಿ ಸಫಲಗೊಂಡಿದೆ.
ಧನ್ಯವಾದಗಳು ಮೇಡಂ
ಅರ್ಥವತ್ತಾದ ಸಂದೇಶಯುಕ್ತ ಕವನ.
ಧನ್ಯವಾದಗಳು ಮೇಡಂ